Kitturu Rani Channamma University, Belagavi
Formerly known as 'Rani Channamma University, Belagavi'

Press Notes


ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರ ಯಶಸ್ವಿಯಾಗಿ ಆರಂಭ

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಗಣಕ ವಿಜ್ಞಾನ ವಿಭಾಗದ ವತಿಯಿಂದ PM-UShA MERU ಯೋಜನೆಯ (Soft Components–22 & 25) ಅಡಿಯಲ್ಲಿ, ಯುನಿವರ್ಸಿಟಿ ಆಫ್ ಸಾಲ್ಫರ್ಡ್, ಮ್ಯಾಂಚೆಸ್ಟರ್ (ಯು.ಕೆ.) ಸಹಯೋಗದಲ್ಲಿ "National Workshop on Intelligent Systems & Machine Learning for Emerging Trends in Scientific Research (NWISML-2026)" ಎಂಬ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರವನ್ನು ದಿನಾಂಕ 05 ಹಾಗೂ 06 ಆಗಸ್ಟ್ 2026 ರಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಕುಲಸಚಿವರಾದ ಪ್ರೊ. ಬಸವರಾಜ ಅನಾಮಿ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅಪಾರ ಅವಕಾಶಗಳಿದ್ದು, ಇಂತಹ ಕಾರ್ಯಗಾರಗಳು ಯುವ ಸಂಶೋಧಕರಲ್ಲಿ ಹೊಸ ಚಿಂತನೆ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸಲಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಗಾರದಲ್ಲಿ ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶಿವಕುಮಾರ್ ಪಿ. (University of Salford, Manchester, UK) ಅವರು ಭಾಗವಹಿಸಿ, ಇತ್ತೀಚಿನ ಸಂಶೋಧನಾ ಪ್ರವೃತ್ತಿಗಳು, ಕೃತಕ ಬುದ್ಧಿಮತ್ತೆಯ ಬೆಳವಣಿಗೆಗಳು ಹಾಗೂ ಜಾಗತಿಕ ಸಂಶೋಧನಾ ಸಹಯೋಗದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಅಂತರರಾಷ್ಟ್ರೀಯ ಸಹಯೋಗದ ಮೂಲಕ ಗುಣಮಟ್ಟದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ್ ಅವರು ಮಾತನಾಡಿ, PM-USHA MERU ಯೋಜನೆಯಡಿ ಆಯೋಜಿಸಲಾಗುತ್ತಿರುವ ಈ ರಾಷ್ಟ್ರೀಯ ಕಾರ್ಯಗಾರವು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ. 

ಪ್ರೊ. ಶಿವಾನಂದ ಗೋರನಾಳೆ, ಗಣಕ ವಿಜ್ಞಾನ ವಿಭಾಗದ ಅಧ್ಯಕ್ಷರು ಮಾತನಾಡಿ, ಈ ಕಾರ್ಯಾಗಾರವು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಹೊಸ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವ ಉತ್ತಮ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. 

ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಕುಲಸಚಿವರಾದ ಶ್ರೀ ಸಂತೋಷ ಕಾಮಗೌಡ ಕೆ.ಎ.ಎಸ್. ಕಾರ್ಯಾಗಾರದ ಎರಡನೇ ದಿನವಾದ 06 ಆಗಸ್ಟ್ 2026 ರಂದು ಮತ್ತಷ್ಟು ತಾಂತ್ರಿಕ ಅಧಿವೇಶನಗಳು ಹಾಗೂ ಸಂಶೋಧನಾ ಚರ್ಚೆಗಳು ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಪ್ರೊ. ಡಿ. ಎನ್. ಪಾಟೀಲ್, ಕುಲಸಚಿವರು (ಮೌಲ್ಯಮಾಪನ), ಶ್ರೀಮತಿ ಸಪ್ನ ಎಂ. ಎ., ಹಣಕಾಸು ಅಧಿಕಾರಿಗಳು, ಪ್ರೊ. ವಿ. ಬಿ. ಅವಟಿ, ಡೀನರು, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ, ಪ್ರೊ. ಸಿ. ಎನ್. ಮನಗೂಳಿ, ನಿರ್ದೇಶಕರು, IQAC, ರಾಚವಿ, ಬೆಳಗಾವಿ, ಡಾ. ನಂದಿನಿ ದೇವರಮನಿ, ಸಂಯೋಜಕರು, PM-USHA (MERU), ಪ್ರೊ. ಪರಶುರಾಮ ಬನ್ನಿಗಿಡದ, ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಹಾಗೂ ಡಾ. ಮಲ್ಲಮ್ಮ ರೆಡ್ಡಿ, ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಉಪಸ್ಥಿತರಿದ್ದರು.


Press Report on KRCUB's National Green University Ranking 2026

Kitturu Rani Channamma University (KRCUB), Belagavi, participated in the National Green University Ranking (NGUR) 2026, conducted by Green Mentors, and secured an impressive All India Rank of 26 with a score of 90.7 out of 100. To celebrate this remarkable achievement, the NIRF/NGUR Committee, in association with the Internal Quality Assurance Cell (IQAC), KRCUB, organized a felicitation programme on 29 July 2026 at 12:00 p.m. in Kuvempu Hall, KRCUB.

The programme commenced with a welcome address by Prof. R. N. Mangoli, Director, IQAC, who welcomed the dignitaries and shared the university's journey from the initial stages of participation to the successful submission of the ranking data. He elaborated on the various challenges encountered during the process and acknowledged the wholehearted support extended by the university administration. He also expressed his sincere gratitude to Shri Sagar Waghmare of Dharti Geo Insights and his team for their valuable guidance and assistance throughout the ranking process.

Addressing the gathering as the Chief Guest, Shri. Santosh Kamagouda K.A.S., Registrar, KRCUB, congratulated all the faculty members, officers, and staff who had contributed directly and indirectly to this significant achievement. He appreciated the collective efforts of the university community and encouraged both the teaching and non-teaching staff to continue their dedicated work, expressing confidence that such commitment would help the university secure even higher positions in upcoming national ranking frameworks.

Presiding over the programme, Prof. C. M. Thyagaraja, Hon'ble Vice-Chancellor, KRCUB, congratulated the entire university fraternity on this outstanding accomplishment. In his presidential address, he stated that such achievements are possible only through the collective efforts and mutual cooperation of the teaching, non-teaching, and administrative staff. He urged everyone to maintain the same spirit of teamwork and dedication to achieve greater success in forthcoming NAAC, NIRF, and other ranking and accreditation frameworks.

The programme concluded with a vote of thanks delivered by Dr. Maheshkumar N., Department of Mathematics, KRCUB. Prof. D. N. Patil, Registrar (Evaluation), Deans, Professors, Administrative Heads, and members of the teaching and non-teaching staff were present on the occasion.

 



Sd/-

Registrar