ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ


ಸಂಯೋಜನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿ.ಡಿ.ಸಿ. ವಿಭಾಗದ ಕಾರ್ಯಚಟುವಟಿಕೆಗಳು

  • ಸಂಯೋಜನೆ ಅಧಿಸೂಚನೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವುದು.
  • ಅಧಿಸೂಚನೆಯನ್ನು 3 ಕನ್ನಡ, 1 ಇಂಗ್ಲೀಷ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
  • ಸಂಯೋಜನೆಗೆ ಸಂಬಂಧಿಸಿದ, ವಿವಿಧ ಬಗೆಯ ಸಂಯೋಜನಾ ಅರ್ಜಿ, ಸಂಯೋಜನೆಗೆ ಸಂಬಂಧಿಸಿದ ನಿಯಮಾವಳಿ, ಶುಲ್ಕಗಳ ಮಾಹಿತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿ ಅಳವಡಿಸಲಾಗಿರುತ್ತದೆ. (www.rcub.ac.in)
  • ಸಂಯೋಜನೆಯ ಅಧಿಸೂಚನೆಯು, ಅರ್ಜಿ ವಿಧಾನ , ನಿಗದಿಪಡಿಸಿದ ದಿನಾಂಕಗಳ ವಿವರವನ್ನು ಒಳಗೊಂಡಿರುತ್ತದೆ.
  • ಸಂಸ್ಥೆ/ಮಹಾವಿದ್ಯಾಲಯಗಳಿಂದ ವಿವಿಧ ಬಗೆಯ ಸಂಯೋಜನೆಯ ಅರ್ಜಿಯನ್ನು ಸ್ವೀಕರಿಸಲಾಗುವುದು.
  • ಮಹಾವಿದ್ಯಾಲಯದವರು ಸಲ್ಲಿಸಿದ ಸಂಯೋಜನಾ ಅರ್ಜಿಯನ್ನು ಪರಿಶೀಲಿಸುವುದು.
  • ಮಹಾವಿದ್ಯಾಲಯದವರು ಸಲ್ಲಿಸಿದ ಅರ್ಜಿಯನ್ನು ರಿಜಿಸ್ಟರನಲ್ಲಿ ದಾಖಲಿಸಲಾಗುವುದು. (ಮಹಾವಿದ್ಯಾಲಯದ ಹೆಸರು, ಕೋಡ ಸಂಖ್ಯೆ, ಸಂಯೋಜನೆಗೆ ಅರ್ಜಿ ಸಲ್ಲಿಸಿದ ಕೋರ್ಸಗಳ ವಿವರ, ಸಂಯೋಜನೆ ವಿಧ, ಶುಲ್ಕಗಳ ವಿವರ, ಭರಿಸಿದ ದಿನಾಂಕ, ಚಲನ್ ನಂ. ಇತ್ಯಾದಿ)
  • ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಸಂಯೋಜನೆಗೆ ಅರ್ಜಿ ಸಲ್ಲಿಸಿದ ಮಹಾವಿದ್ಯಾಲಯಗಳ ಅರ್ಜಿಯನ್ನು ಸಿಂಡಿಕೇಟ್ ಸಭೆಯ ಪರಿಶೀಲನೆಗಾಗಿ ಮಂಡಿಸಲಾಗುವುದು.
  • ಮಹಾವಿದ್ಯಾಲಯಗಳ ಪರಿಶೀಲನೆಗಾಗಿ ತನಿಖಾ ಸಮಿತಿಗಳನ್ನು ರಚಿಸಲಾಗುವುದು.
  • ಸಮಿತಿಯಲ್ಲಿ ಹಿರಿಯ ಪ್ರಾಧ್ಯಾಪಕರನ್ನು ಅಧ್ಯಕ್ಷರನ್ನಾಗಿ, ಸಹ ಪ್ರಾಧ್ಯಾಪಕರನ್ನೊಳಗೊಂಡ ಮೂರು ಅಥವಾ ನಾಲ್ಕು ಜನರ ಸಮಿತಿಯನ್ನು ರಚಿಸಿ, ಸಮಿತಿಯಲ್ಲಿ ಒಬ್ಬರು ಪ.ಜಾ/ಪ.ಪಂ. ಇವರನ್ನು ನೇಮಿಸಲಾಗುವುದು.
  • ಸಮಿತಿಗಳನ್ನು ರಚಿಸಿದ ನಂತರ ತಾಲೂಕುವಾರು ಮಹಾವಿದ್ಯಾಲಯಗಳ ಪರಿಶೀಲನೆಗೆ ಕಳುಹಿಸಲಾಗುವುದು.
  • ಸಮಿತಿಯವರಿಗೆ, ಭೇಟಿ ನೀಡಬೇಕಾದ ಮಹಾವಿದ್ಯಾಲಯಗಳ ವೇಳಾಪಟ್ಟಿ, ಕೋರ್ಸ ಮತ್ತು ಸಂಯೋಜನೆ ವಿಧವನ್ನು ಒಳಗೊಂಡಿರುವ ಪತ್ರವನ್ನು ನೀಡಲಾಗುವುದು ಮತ್ತು ಮಹಾವಿದ್ಯಾಲಯಕ್ಕೆ ಸಮಿತಿಯು ಭೇಟಿ ನೀಡುವ ದಿನಾಂಕದ ವಿವರ ಇರುವ ಪತ್ರವನ್ನು ಕಳುಹಿಸಲಾಗುವುದು.
  • ಸಮಿತಿಯವರಿಗೆ, ಮಹಾವಿದ್ಯಾಲಯಗಳ ಭೇಟಿಗಾಗಿ ಸಿಡಿಸಿ ವಿಭಾಗದಿಂದ ವಾಹನವನ್ನು ಪೂರೈಸಲಾಗುವುದು.
  • ಸಮಿತಿಯವರಿಂದ, ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ವರದಿಯನ್ನು ಸ್ವೀಕರಿಸಲಾಗುವುದು.
  • ಸದರಿ ವರದಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಮತ್ತು ಶಿಫಾರಸ್ಸು ಮಾಡದೇ ಇರುವ ವರದಿಗಳನ್ನು ಪ್ರತ್ಯೇಕಿಸಲಾಗುವುದು.
  • ಸಮಿತಿಯವರು ನೀಡಿರುವ ವರದಿಗಳನ್ನು ಮೊದಲು ವಿದ್ಯಾವಿಷಯಕ ಪರಿಷತ್ ಸಭೆಗೆ ನಂತರ ಸಿಂಡಿಕೇಟ್ ಸಭೆಗೆ ಮಂಡಿಸಲಾಗುವುದು.
  • ಸರಕಾರದಿಂದ ಮಂಜೂರಾತಿ ಪಡೆಯಬೇಕಾದಂಥ ವಿವಿಧ ಬಗೆಯ ಸಂಯೋಜನೆಗಳಾದ, ಹೊಸ ಮಹಾವಿದ್ಯಾಲಯದ ಸಂಯೋಜನೆ, ಹೊಸ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸಗಳ ಸಂಯೋಜನೆ, ಹೊಸ ಭಾಷಾ ಮತ್ತು ಮೂಲ ವಿಷಯಗಳ ಸಂಯೋಜನೆ, ಶಾಶ್ವತ ಸಂಯೋಜನೆ ಹಾಗೂ ಸ್ನಾತಕೋತ್ತರ/ವೃತ್ತಿಪರ ಸ್ನಾತಕ ಕೋರ್ಸಗಳ ಪ್ರವೇಶ ಮಿತಿಹೆಚ್ಚಳದ ಪ್ರಸ್ತಾವನೆಯನ್ನು ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಸಲ್ಲಿಸಲಾಗುವುದು.
  • ವಿಶ್ವವಿದ್ಯಾಲಯದ ಮಟ್ಟದಲ್ಲಿ ನೀಡಬೇಕಾದಂಥ ಮುಂದುವರಿಕೆ/ವಿಸ್ತರಣೆಗೆ ಮತ್ತು ಪ್ರವೇಶ ಮಿತಿ ಹೆಚ್ಚಳಕ್ಕಾಗಿ ಅರ್ಜಿ ಸಲ್ಲಿಸಿದಂಥ ಮಹಾವಿದ್ಯಾಲಯಗಳಿಗೆ ತನಿಖಾ ಸಮಿತಿಯವರು ನೀಡಿರುವ ವರದಿಯಲ್ಲಿ ಕಾಣಿಸಿರುವ ಷರತುಗಳನ್ನು ಪೂರೈಸುವ ಕುರಿತಾಗಿ ಮಹಾವಿದ್ಯಾಲಯಗಳಿಗೆ ಪತ್ರವನ್ನು ಕಳುಹಿಸಲಾಗುವುದು.
  • ಮಹಾವಿದ್ಯಾಲಯದವರು ಷರತ್ತುಗಳನ್ನು ಪೂರೈಸಿರುವ ಕುರಿತಾಗಿ ಸಲ್ಲಿಸಿದ ಅನುಪಾಲನಾ ವರದಿಯನ್ನು ಪರಿಶೀಲಿಸಿ ಮಹಾವಿದ್ಯಾಲಯಗಳಿಗೆ ಮುಂದುವರಿಕೆ/ವಿಸ್ತರಣೆಯ ಅಧಿಸೂಚನೆಯನ್ನು ಮತ್ತು ಪ್ರವೇಶ ಮಿತಿಹೆಚ್ಚಳದ ಪತ್ರವನ್ನು ಕಳುಹಿಸಲು ಕ್ರಮಕೈಗೊಳ್ಳಲಾಗುವುದು.

ಇತರೆ ಕಾರ್ಯಚಟುವಟಿಕೆಗಳು

  • ಸರಕಾರದ ನಿರ್ದೇಶನದಂತೆ ಸಂಯೋಜನೆಯ ಪ್ರಕ್ರಿಯೆಯನ್ನು ಅಂಜರ್ತಾಲದ ಮುಖಾಂತರ ಕೈಗೊಳ್ಳುವುದು.
  • ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರಿಗೆ ಮತ್ತು ಬೋಧಕ ಸಿಬ್ಬಂದಿಯವರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ಅವರು ಸಲ್ಲಿಸುತ್ತಿರುವ ಹುದ್ದೆಗೆ ಅನುಮೋದನೆ ನೀಡುವುದು.
  • ಮಹಾವಿದ್ಯಾಲಯದ ಸ್ಥಗಿತ, ವಿಲೀನಗೊಳಿಸುವುದು, ಸ್ಥಳಾಂತರಿಸುವುದು ಮತ್ತು ಹೆಸರು ಬದಲಾವಣೆಗೆ ಸಂಬಂಧಿಸಿದ ಕಾರ್ಯಕೈಗೊಳ್ಳುವುದು.
  • ಮಹಾವಿದ್ಯಾಲಯದವರು 2ಎಫ್ ಮತ್ತು 12ಬಿ ಮಾನ್ಯತೆಯನ್ನು ಪಡೆಯುವ ಸಲುವಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಮುಂದಿನ ಕ್ರಮಕ್ಕಾಗಿ ಯುಜಿಸಿ ನವದೆಹಲಿ/ಬೆಂಗಳೂರು ಇವರಿಗೆ ಕಳುಹಿಸಲಾಗುವುದು.
  • ಮಹಾವಿದ್ಯಾಲಯದವರು ಸಲ್ಲಿಸಿದ ಎಂ.ಆರ್.ಪಿ. ಪ್ರಸ್ತಾವನೆ, ಕಟ್ಟಡ ಅಭಿವೃದ್ಧಿ ಪ್ರಸ್ತಾವನೆ, ಮಹಿಳಾ ವಸತಿ ನಿಲಯ ಕಟ್ಟಡದ ಪ್ರಸ್ತಾವನೆ ಮತ್ತು ಸಿ.ಪಿ.ಇ. ಪ್ರಸ್ತಾವನೆಗಳನ್ನು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಇವರಿಗೆ ಕಳುಹಿಸಿವುದು.
  • ಶಿಕ್ಷಣ ಕೋರ್ಸ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಎನ್.ಸಿ.ಟಿ.ಇ. ನಿಯಮಾವಳಿಗಳ ಪ್ರಕಾರ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವುದು.
  • ಸಿ.ಡಿ.ಸಿ. ವಿಭಾಗವು ಯು.ಜಿ.ಸಿ, ಎ.ಐ.ಸಿ.ಟಿ.ಇ, ಎನ್.ಸಿ.ಟಿ.ಇ. ಮತ್ತು ಕರ್ನಾಟಕ ಸರಕಾರ ಇವರು ಸಲಹೆ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವುದು.