Hide Main content block

ಗೌರವಾನ್ವಿತ ಕುಲಪತಿಗಳು,ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

ಪ್ರೊ. ಎಂ. ರಾಮಚಂದ್ರಗೌಡ
ಕುಲಪತಿಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

ಪ್ರೊ. ಎಂ. ರಾಮಚಂದ್ರಗೌಡ ಪ್ರಸ್ತುತ, ಕರ್ನಾಟಕ ರಾಜ್ಯದಲ್ಲೇ ದೊಡ್ಡ ವಿಶ್ವವಿದ್ಯಾಲಯವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 4ನೇ ಜುಲೈ, 2019ರಿಂದ ಕುಲಪತಿಗಳಾಗಿದ್ದಾರೆ. ಅವರು ಅಗಾಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಹೆಸರಾಂತ ವಾಣಿಜ್ಯಶಾಸ್ತ್ರದ ಹಿರಿಯ ಶಿಕ್ಷಣ ತಜ್ಞರಾಗಿದ್ದಾರೆ. ಬೋಧನೆಯಿಂದ ಹಿಡಿದು ಸಂಸ್ಥೆಗಳ ನಿರ್ವಹಣೆಯ ತನಕ ಅವರು ನೀಡಿದ ಕೊಡುಗೆಗಳು, ಅವರ ತುಂಬು ವೃತ್ತಿ ಜೀವನಕ್ಕೆ ಕನ್ನಡಿಯಾಗಿವೆ. “ಮಾರ್ಕೆಟಿಂಗ್ ಮ್ಯಾನೇಜಮೆಂಟ್” ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಇವರಿಗೆ 34 ವರ್ಷಗಳ ಸುದೀರ್ಘ ಬೋಧನಾ ಅನುಭವವಿದೆ. 1986ರಲ್ಲಿ ಬೆಂಗಳೂರಿನ ಬಿ.ಟಿ.ಎಲ್. ಜ್ಯೂನಿಯರ್ ಕಾಲೇಜ ಆಫ್ ಕಾಮರ್ಸ್ನಲ್ಲಿ ಲೆಕ್ಚರರಾಗಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟರು. ಮುಂದೆ ಹಂತ ಹಂತವಾಗಿ ಪದೋನ್ನತಿ ಹೊಂದುತ್ತ ಜನವರಿ 2007 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರ ಹುದ್ದೆಯನ್ನು ಲಭಿಸಿಕೊಂಡರು.

ಸಂಶೋಧನೆಯಲ್ಲಿ ಅಪಾರ ಅಭಿರುಚಿಯನ್ನು ಹೊಂದಿದ ಮಾನ್ಯರು, 75 ಕ್ಕಿಂತ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ ಮಂಡನೆಗಳನ್ನು ಪ್ರಸ್ತುತಪಡಿಸಿರುತ್ತಾರೆ ಹಾಗೂ ಸಮೃದ್ಧ ಸಂಖ್ಯೆಯಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಅವರು ಆಯೋಜಿಸಿದ ಉನ್ನತ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳಿಂದ ಅವರಲ್ಲಿರುವ ಸಂಘಟನಾ ಕೌಶಲ್ಯಗಳ ಪರಿಚಯವಾಗುತ್ತದೆ. “ಕಾರ್ಪೊರೇಟ್ ಫೈನಾನ್ಷಿಯಲ್ ಮ್ಯಾನೇಜಮೆಂಟ್”, “ಇಂಡಿಯನ್ ಬ್ಯಾಂಕಿoಗ್”, “ಮಾನಟರಿ ಸಿಸ್ಟಮ್”, “ಬಿಜನೆಸ್ ಎನ್ವಾಯರನಮೆಂಟ್” ಮತ್ತು “ಫೈನನ್ಷಿಯಲ್ ಮ್ಯಾನೇಜಮೆಂಟ್” ಎಂಬ ಪುಸ್ತಕಗಳನ್ನು ಪ್ರಕಟಿಸಿದ ಇವರ ಲೇಖನಾ ಸಾಮರ್ಥ್ಯ ಶ್ಲಾಘನೀಯ. ಅವರ ಸಂಶೋಧನಾ ಕುಶಾಗ್ರಮತಿಯಿಂದ ಇಲ್ಲಿಯವರೆಗೆ 13 ಸಂಶೋಧನಾರ್ಥಿಗಳಿಗೆ ಪಿಹೆಚ್.ಡಿ ಹಾಗು 6 ಸಂಶೋಧನಾ ವಿದ್ಯಾರ್ಥಿಗಳಿ ಎಂ.ಫಿಲ್ ಪದವಿಗಳು ದೊರಕಿರುತ್ತವೆ. ಇವರ ಮಾರ್ಗದರ್ಶನದಲ್ಲಿ ಇನ್ನೂ 6 ಸಂಶೋಧನಾರ್ಥಿಗಳ ಸಂಶೋಧನಾ ಕಾರ್ಯವು ಪ್ರಗತಿಯಲ್ಲಿರುವುದು.

ಪ್ರಭಾವಶಾಲಿ ಶೈಕ್ಷಣಿಕ ಪರಿಣಿತಿಯ ಜೊತೆಗೆ ದಕ್ಷ ಆಡಳಿತಾತ್ಮಕ ಕೌಶಲ್ಯಗಳನ್ನು ಹೊಂದಿದ ಕಾರಣ, ಇವರಿಗೆ ಅನೇಕ ಮಹತ್ವದ ಹುದ್ದೆಗಳು ಅನುಸರಿಸಿ ಬಂದಿರುತ್ತವೆ. ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರದ ಹಾಗು ನಿರ್ವಹಣೆಶಾಸ್ತ್ರದ ನಿಖಾಯದ ಡೀನರಾಗಿ, ಅಭ್ಯಾಸ ಮಂಡಳಿ, ಪರೀಕ್ಷಾ ಮಂಡಳಿ ಹಾಗೂ ನೇಮಕಾತಿ ಮಂಡಳಿಗಳ ಸದಸ್ಯ ಮತ್ತು ಅಧ್ಯಕ್ಷರಾಗಿ, ಚುನಾಯಿತ ಸೆನೇಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ವಿದ್ಯಾವಿಷಯಕ್ ಪರಿಷತ್ತಿನ ಸದಸ್ಯರಾಗಿ ಹಾಗೂ ಭಾರತೀಯ ವಾಣಿಜ್ಯ ಸಂಘದ ಅಧ್ಯಕ್ಷರಾಗಿ ಕಾರ್ಯ ನಿಭಾಯಿಸಿದ್ದಾರೆ. ಇವರ ದಕ್ಷ ನಾಯಕತ್ವದ ಫಲಶೃತಿಯಾಗಿ, ಬೆಂಗಳೂರು ಕೇಂದ್ರಿಯ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನವೆಂಬರ 2017 ರಿಂದ ಜುಲೈ 2019 ರವರೆಗೂ ಸೇವೆ ಸಲ್ಲಿಸಿರುತ್ತಾರೆ.

ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅರ್ಥೈಸಿಕೊಂಡು ಅವುಗಳನ್ನು ಪರಿಹರಿಸಲು ಪರಸ್ಪರ ಸಂವಹನ ಒಂದು ಅದ್ಭುತ ಸಾಧನವೆಂದು ಹಾಗು ದಕ್ಷವಾಗಿ ಕಾರ್ಯ ನಿಭಾಯಿಸಲು ಅಂತರ್ಗತವಾಗಿರುವುದು ಯಾವುದೇ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿರಬೇಕೆoಬುದರಲ್ಲಿ ನಂಬಿಕೆಯಿಟ್ಟುಕೊoಡಿರುವವರು.

ಪ್ರಸ್ತುತ, ಪ್ರೊ. ಎಂ. ರಾಮಚಂದ್ರಗೌಡ ಇವರು ಬೆಳಗಾವಿ, ವಿಜಯಪುರ ಹಾಗು ಬಾಗಲಕೋಟ ಜಿಲ್ಲೆಗಳ ವ್ಯಾಪ್ತಿ ಹೊಂದಿ, ಸುಮಾರು 380ಕ್ಕೂ ಹೆಚ್ಚು ಸಂಯೋಜಿತ ಮಹಾವಿದ್ಯಾಲಯಗಳು, 3 ಸ್ನಾತಕೋತ್ತರ ಕೇಂದ್ರಗಳನ್ನು ಹಾಗು ಒಂದು ಘಟಕ ಮಹಾವಿದ್ಯಾಲಯವನ್ನು ಹೊಂದಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಭವ್ಯವಾದ ಶೈಕ್ಷಣಿಕ ಹಾಗು ಆಡಳಿತಾತ್ಮಕ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಸಂಸ್ಥೆಯ ನೀತಿ ವಿಚಾರಗಳಿಂದ ಹಿಡಿದು ದೈನಂದಿನ ಚಟುವಟಿಕೆಗಳವರೆಗೂ ಇವರು ಹೊಂದಿರುವ ವಿಶ್ವವಿದ್ಯಾಲಯದ ಆಡಳಿತಾತ್ಮಕ ಅನುಭವಗಳೊಂದಿಗೆ, ವಿಶ್ವವಿದ್ಯಾಲಯವು ಸರ್ವಾಂಗೀಣ ಅಭಿವೃದ್ಧಿ, ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಯತ್ತ ದಾಪುಗಾಲನ್ನಿಡುಸುವಲ್ಲಿ ಹಾಗು ಉನ್ನತ ಶಿಕ್ಷಣವನ್ನು ಸಮಾಜಕ್ಕೆ ಸಮಾನವಾಗಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುತ್ತಾರೆ.

Top